ಜಾಗತಿಕ ಮಹಾಮಾರಿ "ಕೋವಿಡ್ 19" ಪ್ರಯುಕ್ತ ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಜನರಿಗೆ ಯಾವುದೇ ಜಾತಿ, ಧರ್ಮ ನೋಡದೆ ತುರ್ತು ಸಹಾಯ, ಸಾಂತ್ವನ ಸೇವೆಗಳಲ್ಲಿ SYS ಉಳ್ಳಾಲ ಸೆಂಟರ್ ತೊಡಗಿಸಿಕೊಂಡಿದೆ.
*ಒಂದುವರೆ ಲಕ್ಷ ರೂಪಾಯಿಗಳಿಗೂ ಮಿಕ್ಕ ಮೌಲ್ಯದ ರೇಷನ್ ಕಿಟ್ಟುಗಳು SYS ಉಳ್ಳಾಲ ಸೆಂಟರ್ ಸಾರಥ್ಯದಲ್ಲಿ ಸದ್ಯದಲ್ಲೇ ವಿತರಿಸಲಾಗುತ್ತಿದ್ದು, ಈ ಸಾಂತ್ವನ ಕಾರ್ಯಕ್ರಮಕ್ಕೆ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ 13,000 ರೂಪಾಯಿಗಳ ಧನ ಸಹಾಯ ನೀಡಲಾಯಿತು.*
ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಂಡು ತೇಗುವವನು ನನ್ನವನಲ್ಲ ಎಂದು ಸಾರಿ ಹೇಳಿದ ಪ್ರವಾದಿ ﷺ ರವರ ಪವಿತ್ರ ಸಂದೇಶಕ್ಕೆ ಜೀವ ತುಂಬಿರುವ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಸೆಂಟರ್ ನಡೆಸುವ ಹಸಿದವರಿಗೆ ಉಣ ಬಡಿಸುವ ಮಾದರಿಯೋಗ್ಯ ಕಾರ್ಯಾಚರಣೆಯೊಂದಿಗೆ ಕೈ ಜೋಡಿಸಿದೆ.
ಹಸಿದವನಿಗೆ ಉಣ ಬಡಿಸುವುದು ಅತ್ಯಂತ ದೊಡ್ಡ ಪುಣ್ಯದಾಯಕ ಕರ್ಮವಾಗಿದೆ. ಇಸ್ಲಾಮ್ ಅದಕ್ಕೆ ದೊಡ್ಡ ಪ್ರತಿಫಲ ನೀಡುವುದಾಗಿ ಘೋಷಿಸುತ್ತದೆ. ಹಸಿದವನ ಹಸಿವು ನೀಗಿಸುವ ಸೇವೆ ನಿಜಕ್ಕೂ ಶ್ಲಾಘನೀಯ. ಅಲ್ಲಾಹು ಸ್ವೀಕರಿಸಲಿ. ರೇಷನ್ ಕಿಟ್ಟುಗಳ ವಿತರಣೆಗೆ ಧನ ಸಹಾಯ ನೀಡಲು ಸಹಕರಿಸಿದ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚಿನ ಸದಸ್ಯರಿಗೂ, ಇತರರಿಗೂ ಅಲ್ಲಾಹನು ಇಹಪರ ಎರಡರಲ್ಲೂ ಸಂತೋಷವನ್ನು ನೀಡಲಿ. ಇಹದಲ್ಲಿ ಐಶ್ವರ್ಯ, ಸಿರಿವಂತಿಕೆ ನೀಡಲಿ. ಪರದಲ್ಲಿ ಸ್ವರ್ಗವನ್ನು ನೀಡಲಿ. ಆಮೀನ್
✍️ ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ

Comments