ಎಸ್ ವೈ ಎಸ್ ಮದನಿನಗರ ಬ್ರಾಂಚ್ ಆಶ್ರಯದಲ್ಲಿ ಅಜ್ಮೀರ್ ಮೌಲಿದ್ ಹಾಗು ರಜಬ್ ಸಂದೇಶ ಕಾರ್ಯಕ್ರಮ ಬ್ರಾಂಚ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ಮೊರೊಕ್ಕೋ ರವರ ಅಧ್ಯಕ್ಷತೆಯಲ್ಲಿ ಮದನಿ ನಗರದ ಅಲ್ ಮದ್ರಸತುಲ್ ಸಯ್ಯಿದ್ ಮದನಿ ಮದ್ರಸ ಹಾಲ್ ನಲ್ಲಿ ನಡೆಯಿತು. ಸಯ್ಯಿದ್ ಮದನಿ ಮದ್ರಸದ ಸದರ್ ಮುಅಲ್ಲಿಮರಾದ ಅಯ್ಯೂಬ್ ಮಹ್ಲರಿ ದುವಾ ನಡೆಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು.
ಪವಿತ್ರ ರಜಬ್ ತಿಂಗಳು ಏನು ಸಂದೇಶ ನೀಡುತ್ತದೆ ಎಂಬುದರ ಕುರಿತು ಸುನ್ನೀ ಮೊಹಲ್ಲಾ ಒಕ್ಕೂಟ SMO ಉಳ್ಳಾಲ ಹಾಗು ಅಳೇಕಲ ಜುಮಾ ಮಸೀದಿಯ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ತರಗತಿ ನಡೆಸಿದರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಮದನಿ ಮದ್ರಸದ ಅಧ್ಯಕ್ಷರಾದ ಇಸ್ಮಾಯಿಲ್ ಎಸ್. ಎ, ಅಲ್ ಹಾಜ್ ಅಬ್ದುಲ್ ಅಝೀಝ್ ಮದನಿ ಶಾಂತಿಭಾಗ್, ಎಸ್ಸೆಸ್ಸೆಫ್ ಮದನಿ ನಗರ ಶಾಖಾಧ್ಯಕ್ಷರಾದ ಶೇಕ್ ಅಹ್ಮದ್ ಶಮೀರ್ ಹಾಗು ಮದನಿಗರದ ಎಸ್ ವೈ ಎಸ್, ಎಸ್ಸೆಸ್ಸೆಫ್ ನ ನಾಯಕರು, ಕಾರ್ಯಕರ್ತರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









Comments