ರಂಝಾನ್ 2 ಅಹ್ಮದ್ ಬಾವ ಉಸ್ತಾದ್ ಮರಣ ಹೊಂದಿ ಒಂದು ವರ್ಷ ಸಾವಿರಾರು ಶಿಷ್ಯರಿಗೆ ಇಸ್ಲಾಮಿನ ಸುಜ್ಞಾನದ ಪ್ರಭೆ ಹರಡಿದ ಉಳ್ಳಾಲದ ಮಹೋನ್ನತ ವಿದ್ವಾಂಸರಾದ ಮರ್ಹೂಂ ಅಹ್ಮದ್ ಬಾವ ಉಸ್ತಾದ್ ಮರಣ ಹೊಂದಿ ಒಂದು ವರ್ಷವಾಗಲಿದೆ. ಅಲ್ಲಾಹನು ಉಸ್ತಾದರ ಪದವಿಯನ್ನು ಉನ್ನತಿಗೇರಿಸಲಿ. ಆಮೀನ್ ಸಯ್ಯಿದ್ ಮದನಿ ಅರೆಬಿಕ್ ಕಾಲೇಜು ಪ್ರಾರಂಭವಾದಂದಿನಿಂದ ತನ್ನ ಆಯುಷ್ಯದ ಕೊನೆಯವರೆಗೂ ಸೇವೆಗೈಯ್ಯುತ್ತಿದ್ದ ಅಗಾಧ ಪಾಂಡಿತ್ಯದ ಒಡೆಯರಾದ ನಮ್ಮೆಲ್ಲರ ಪ್ರೀತಿಯ ಶೈಖುನಾ ಬಾವಾ ಉಸ್ತಾದ್ ರವರು ಇದ್ದಿನಬ್ಬ ಹಾಗು ಖದೀಜಃ ದಂಪತಿಗಳ ಪುತ್ರನಾಗಿ 1942 ರಲ್ಲಿ ಉಳ್ಳಾಲದಲ್ಲಿ ಜನ್ಮ ತಾಳಿದರು. ಜನ್ಮ ನಾಡಿನಲ್ಲೇ ಪ್ರಾಥಮಿಕ ಧಾರ್ಮಿಕ ವಿದ್ಯಾಭ್ಯಾಸವನ್ನು ಪಡೆದ ಅಹ್ಮದ್ ಬಾವಾ ಉಸ್ತಾದರು ಶೈಖುನಾ ತಾಜುಲ್ ಉಲಮಾ ಖ.ಸಿ ರವರ ಬಳಿ ಸರಿ ಸುಮಾರು ಹನ್ನೆರಡು ವರ್ಷಗಳ ಕಾಲ ಉಳ್ಳಾಲದ ದರ್ಸಿನಲ್ಲಿ ವಿದ್ಯಾರ್ಜನೆ ಪಡೆದರು. ನಂತರ ಉನ್ನಂತ ವ್ಯಾಸಂಗಕ್ಕಾಗಿ ವೆಲ್ಲೂರು ಬಾಖಿಯಾತುಸ್ಸಾಲಿಹಾತಿಗೆ ತೆರಳಿ ಬಾಖವಿ ಬಿರುದುದಾರಿಯಾಗಿ ಹೊರಬಂದು, ತದನಂತರ ದಯೂಬಂದ್ ನಿಂದ ಖಾಸಿಮಿ ಬಿರುದನ್ನೂ ಪಡೆದರು. ಧಾರ್ಮಿಕ ವಿಜ್ಞಾನದ ವಿವಿಧ ಮಜಲುಗಳಲ್ಲಿ ಅಗಾಧ ಪಾಂಡಿತ್ಯ ಹೊಂದಿರುವ ಉಸ್ತಾದರು ಬಜಪೆ, ಕನ್ನಂಗಾರ್, ಮೊಗ್ರಾಲ್ ಮೊದಲಾದ ಸ್ಥಳಗಳಲ್ಲಿ ಮುದರ್ರಿಸರಾಗಿ ಕಾರ್ಯ ನಿರ್ವಹಿಸಿ ತನ್ನ ಅರಿವನ್ನು ವಿದ್ಯಾದಾಹಿಗಳಿಗೆ ಪಸರಿಸಿ, ಬಳಿಕ ತನ್ನ ಹುಟ್ಟೂರಾದ ಉಳ್ಳಾಲದಲ್ಲಿ ಮುದರ್ರಿಸಾಗಿ ನೇಮಕಗೊಂಡ...
ಇದು SYS ಉಳ್ಳಾಲ ಸೆಂಟರಿನ ಅಧಿಕ್ರತ ಬ್ಲಾಗ್ ಆಗಿದೆ.ಇದರಲ್ಲಿ SYS ಉಳ್ಳಾಲ ಸೆಂಟರ್ ಮತ್ತು ಇದರ ಅಧೀನ ಬ್ರಾಂಚುಗಳ ಕಾರ್ಯಕ್ರಮಗಳು, ವರದಿಗಳು ಹಾಗೂ ಫೋಟೋಸ್ ಗಳು ಲಭ್ಯವಾಗಲಿದೆ