ಜಾಗತಿಕ ಮಹಾಮಾರಿ "ಕೋವಿಡ್ 19" ಪ್ರಯುಕ್ತ ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಜನರಿಗೆ ಯಾವುದೇ ಜಾತಿ, ಧರ್ಮ ನೋಡದೆ ತುರ್ತು ಸಹಾಯ, ಸಾಂತ್ವನ ಸೇವೆಗಳಲ್ಲಿ ತೊಡಗಿಸಿಕೊಂಡಿರುವ SYS ಉಳ್ಳಾಲ ಸೆಂಟರ್.
ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ವಾಸಿಸುತ್ತಿರುವ ತಮಿಳು ನಾಡು ಮೂಲದ ಸತೀಶ್ ರಾಮಚಂದ್ರನ್ ಎಂಬ ಹಿಂದೂ ಸಹೋದರ ಕಳೆದ ಮೂರು ದಿನಗಳಿಂದ ಹಸಿವು ನೀಗಿಸಲು ಕಷ್ಟಪಡುತ್ತಿದ್ದುದನ್ನು ಅರಿತ ಎಸ್ ವೈ ಎಸ್ ಉಳ್ಳಾಲ ಸೆಂಟರ್ ನಾಯಕರು ತುರ್ತು ಪರಿಹಾರವಾಗಿ ನಿನ್ನೆ (27-03-2020) ಅಗತ್ಯ ರೇಷನನ್ನು ಮನೆಗೆ ತಲುಪಿಸಿದರು. ಈ ಸಂದರ್ಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ನಾಯಕರೂ, ಕರ್ನಾಟಕ ರಾಜ್ಯ ಎಸ್ ವೈ ಎಸ್ ಸದಸ್ಯರೂ ಆದ ಹನೀಫ್ ಹಾಜಿ ಉಳ್ಳಾಲ, ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ಉಪಸ್ಥಿತರಿದ್ದರು.
ಒಂದುವರೆ ಲಕ್ಷ ರೂಪಾಯಿಗಳಿಗೂ ಮಿಕ್ಕ ಮೌಲ್ಯದ ಕಿಟ್ಟುಗಳು SYS ಉಳ್ಳಾಲ ಸೆಂಟರ್ ಸಾರಥ್ಯದಲ್ಲಿ ಸದ್ಯದಲ್ಲಿ ಅರ್ಹರ ಪಾಲಾಗಲಿದೆ.
ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಂಡು ತೇಗುವವನು ನನ್ನವನಲ್ಲ ಎಂದು ಸಾರಿ ಹೇಳಿದ ಪ್ರವಾದಿ ﷺ ರವರ ಪವಿತ್ರ ಸಂದೇಶಕ್ಕೆ ಜೀವ ತುಂಬಿರುವ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾದರಿಯೋಗ್ಯ ಕಾರ್ಯಾಚರಣೆಯೊಂದಿಗೆ ಹಸಿದವರಿಗೆ ಉಣ ಬಡಿಸುತ್ತಿದೆ.
ಹಸಿದವನಿಗೆ ಉಣ ಬಡಿಸುವುದು ಅತ್ಯಂತ ದೊಡ್ಡ ಪುಣ್ಯದಾಯಕ ಕರ್ಮವಾಗಿದೆ. ಇಸ್ಲಾಮ್ ಅದಕ್ಕೆ ದೊಡ್ಡ ಪ್ರತಿಫಲ ನೀಡುವುದಾಗಿ ಘೋಷಿಸುತ್ತದೆ. ಹಸಿದವನ ಹಸಿವು ನೀಗಿಸುವ SYS ಉಳ್ಳಾಲ ಸೆಂಟರ್ ಸೇವೆ ನಿಜಕ್ಕೂ ಶ್ಲಾಘನೀಯ. ಅಲ್ಲಾಹು ಸ್ವೀಕರಿಸಲಿ.
✍️ ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ

Comments