Skip to main content

Posts

Showing posts from April, 2022

ಎಸ್ ವೈ ಎಸ್ ಪಟ್ಲ ಬ್ರಾಂಚ್ ವತಿಯಿಂದ ಈದ್ ಕಿಟ್ ವಿತರಣೆ

ಎಸ್ ವೈ ಎಸ್ ಪಟ್ಲ ಬ್ರಾಂಚ್ ವತಿಯಿಂದ ಇಂದು (29/4/2022)  ಜುಮಾ ನಮಾಝಿನ ನಂತರ ಪಟ್ಲ ಜುಮಾ ಮಸೀದಿ ಬಳಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಟ್ಲ ಮೊಹಲ್ಲಾದ 20 ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಲ ಮಸೀದಿಯ ಮುದರ್ರಿಸ್ ಸುಲೈಮಾನ್ ಉಸ್ತಾದ್, ಮಸೀದಿಯ ಅಧ್ಯಕ್ಷರಾದ ಜಮಾಲ್ ಹಾಗು ಎಸ್ ವೈ ಎಸ್ ಪಟ್ಲ ಬ್ರಾಂಚ್ ನಾಯಕರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.

ಬಡ ಕುಟುಂಬಗಳಿಗೆ ಸಾಂತ್ವನದ ಸ್ಪರ್ಶ.ರಂಝಾನ್ ಕಿಟ್ ವಿತರಣೆ.

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಬಡ ಕುಟುಂಬಗಳಿಗೆ ವರ್ಷಂಪ್ರತಿ ವಿತರಿಸಿಕೊಂಡು ಬರುತ್ತಿದ್ದ ರಂಝಾನ್ ಕಿಟ್ ಈ ವರ್ಷವೂ ರಂಝಾನ್ ತಿಂಗಳಲ್ಲಿ ವಿತರಿಸಲಾಯಿತು. ಉಳ್ಳಾಲ ಅಕ್ಕರೆಕೆರೆಯ ಝುಹ್ರಿ ಪ್ಯಾಲೇಸಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 23 ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು. ಬ್ರಾಂಚ್ ಅಧ್ಯಕ್ಷರಾದ ಅಬೂಬಕರ್ ಸಿದ್ದೀಕ್ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಬ್ರಾಂಚ್ ನಾಯಕರಾದ  ಕುತ್ತಾರ್ ಮುಹಮ್ಮದ್ ಹಳೆಕೋಟೆ, ಸೆಂಟರ್ ಸಾಂತ್ವನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಬ್ರಾಂಚ್ ದಅವಾ ಕಾರ್ಯದರ್ಶಿ ಅಶ್ರಫ್ ಝುಹ್ರಿ ಅಕ್ಕರೆಕೆರೆ, ಆರ್ ಕೆ ಮದನಿ ಅಮ್ಮೆಂಬಳ, ಹಸನ್ ಹಾಜಿ ಅಕ್ಕರೆಕೆರೆ, ಖಲೀಲ್ ಹಳೆಕೋಟೆ ಹಾಗು ಟೈಲರ್ ಬದ್ರುದ್ದೀನ್ ಉಪಸ್ಥಿತರಿದ್ದರು. ಕಿಟ್ ವಿತರಣೆಯ ವೀಡಿಯೋ. ಕೆಳಗಿನ ಲಿಂಕ್ ಒತ್ತಿರಿ. https://youtu.be/AfIL9vOoJpw

ಸ್ಕೂಲ್ ಆಫ್ ಅಖೀದಃ ತರಗತಿ ಹಾಗು ರಂಝಾನ್ ಕಿಟ್ ವಿತರಣೆ ಮತ್ತು ಹೊಲಿಗೆ ಯಂತ್ರ ವಿತರಣೆ

ಸ್ಕೂಲ್ ಆಫ್ ಅಖೀದಃ ತರಗತಿ ಹಾಗು ರಂಝಾನ್ ಕಿಟ್ ವಿತರಣೆ ಮತ್ತು ಹೊಲಿಗೆ ಯಂತ್ರ ವಿತರಣೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಉಳ್ಳಾಲ ಮೇಲಂಗಡಿಯ ತಾಜುಲ್ ಉಲಮಾ ಸುನ್ನೀ ಸೆಂಟರಿನಲ್ಲಿ ನಡೆಯಿತು. ರಾಜ್ಯ ಎಸ್ ವೈ ಎಸ್ ಕ್ಯಾಬಿನೆಟ್ ಸಮಿತಿ ಸದಸ್ಯರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ವಿವರಿಸುವ ಸ್ಕೂಲ್ ಆಫ್ ಅಖೀದಃ ತರಗತಿ ನಡೆಸಿದರು. ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಶರೀಫ್ ಮದನಿ ಕೋಟೆಪುರ ಆಶಂಸೆಗೈದರು. ಬಳಿಕ ಉಳ್ಳಾಲ ಪರಿಸರದ ಅರ್ಹ 50 ಬಡ ಕುಟುಂಬಗಳಿಗೆ ರಂಝಾನ್ ಕಿಟ್ ಮತ್ತು ಅರ್ಹ ಓರ್ವರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.  ಸೆಂಟರ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ ಸ್ವಾಗತಿಸಿ, ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಕ್ ಧನ್ಯವಾದಗೈದರು