ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಮಿತಿ ಹಮ್ಮಿಕೊಂಡ ಎಸ್ ವೈ ಎಸ್ ಕ್ಲಾಸ್ ರೂಂ ಸಂಘಟನಾ ತರಬೇತಿ ಶಿಬಿರ, ಸಂಘಟನಾ ವ್ಯವಸ್ಥೆಗಳ ಸಮಗ್ರ ಪರಿಚಯ ಕಾರ್ಯಕ್ರಮ ಮೇಲಂಗಡಿಯ ತಾಜುಲ್ ಉಲಮಾ ಆಡಿಟೋರಿಯಂ ನಲ್ಲಿ ನಡೆಯಿತು.
ಸೆಂಟರ್ ಅಧ್ಯಕ್ಷರಾದ ಪಿ ಎಸ್ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಸ್ವಾಗತ ಭಾಷಣ ಮಾಡಿದರು.
ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ಸಂಘಟನಾ ಕಾರ್ಯದರ್ಶಿ ಜಿ.ಎಂ ಕಾಮಿಲ್ ಸಖಾಫಿ ಸಂಘಟನಾ ತರಗತಿ ನಡೆಸಿದರು.
ಸಂಘಟನೆಯ ಕಾರ್ಯಕರ್ತರಿಗಿರಬೇಕಾದ ಸ್ವಭಾವಗುಣಗಳು, ಜವಾಬ್ದಾರಿಗಳು, ಶಿಸ್ತು, ಕಾರ್ಯಕರ್ತರ ಮತ್ತು ನಾಯಕರ ಪರಸ್ಪರ ಸಂಬಂಧ, ಪ್ರಬೋಧನೆಯ ಶೈಲಿ ಹಾಗೂ ಮುಂದಿನ ಯೋಜನೆ ಇವುಗಳ ಬಗ್ಗೆ ವಿವರಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ರಾಜ್ಯ ಎಸ್ ವೈ ಎಸ್ ಪಬ್ಲಿಕ್ ರಿಲೇಶನ್ಸ್ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್, ಸೆಂಟರ್ ಸಂಘಟನಾ ಕಾರ್ಯದರ್ಶಿ ಫಾರೂಖ್ ಅಬ್ಬಾಸ್ ಹಾಜಿ ಉಳ್ಳಾಲ, ಕೆ.ಸಿ.ಎಫ್ ಸೌದಿ ಅರೇಬಿಯ ನಾಯಕ ಅಬ್ದುಲ್ ಹಮೀದ್ ಹಾಜಿ ಉಳ್ಳಾಲ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಸಯ್ಯಿದ್ ಝಿಯಾದ್ ತಂಗಲ್, ಸೆಂಟರ್ ದಅವಾ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಹಳೆಕೋಟೆ, ಸಾಂತ್ವನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಸೋಶಿಯಲ್ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಇಸಾಬಃ ಅಮೀರ್ ಶರೀಫ್ ಮಂಚಿಲ ಹಾಗೂ ವಿವಿಧ ಬ್ರಾಂಚುಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಮತ್ತು ಇತರ ಸದಸ್ಯರು ಭಾಗವಹಿಸಿದರು. ಸೆಂಟರ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ ಧನ್ಯವಾದ ಗೈದರು.
Comments