Skip to main content

73 ನೇ ಗಣರಾಜ್ಯೋತ್ಸವದ ಪ್ರಯುಕ್ತ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ವಿವಿಧ ಬ್ರಾಂಚುಗಳಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮ


ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಅಳೇಕಲ, ಮೇಲಂಗಡಿ, ಆಝಾದ್ ನಗರ, ಮದನಿ ನಗರ, ತೊಕ್ಕೋಟು, ಮಂಚಿಲ, ಮುಕ್ಕಚೇರಿ, ಮಾರ್ಗತಲೆ, ಸುಂದರಬಾಗ್ ಹಾಗು ಕೋಡಿ ಕೋಟೆಪುರ ಬ್ರಾಂಚುಗಳಲ್ಲಿ ಭಾರತದ 73 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಮತ್ತು ಸಂದೇಶ ಭಾಷಣಗಳು ನಡೆಯಿತು.
ಸಂವಿಧಾನದ ಸುಂದರ ಮೌಲ್ಯಗಳ ವಿರುದ್ಧವಾಗಿ ದೇಶದಲ್ಲಿ ನಡೆಯುವಂತಹ ಘಟನೆಗಳ ವಿರುದ್ಧ ಜಾತಿ-ಮತ, ಧರ್ಮ, ವರ್ಣ ಭಾಷೆ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯನು ಹೋರಾಟ ಮಾಡಬೇಕು. ಸಾಂವಿಧಾನಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದು ಕಾರ್ಯಕ್ರಮದಲ್ಲಿ ಸಂದೇಶ ನೀಡಲಾಯಿತು.
ಸೆಂಟರ್ ನಾಯಕರುಗಳು, ಆಯಾ ಬ್ರಾಂಚುಗಳ ನಾಯಕರುಗಳು, ಸದಸ್ಯರುಗಳು, ಊರ ವಿದ್ವಾಂಸರು, ಸಹೋದರರು, ವಿದ್ಯಾರ್ಥಿಗಳು, ಎಸ್ಸೆಸ್ಸೆಫ್, ರೈಂಬೋ ಕಾರ್ಯಕರ್ತರು ಭಾಗವಹಿಸಿದರು.

Comments