ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ದ್ವಿ ವಾರ್ಷಿಕ ಮಹಾಸಭೆ ಮತ್ತು ಮಹ್ಳರತುಲ್ ಬದ್ರಿಯ್ಯಃ ಆಧ್ಯಾತ್ಮಿಕ ಸಂಗಮ ಹಳೆಕೋಟೆಯ ಹಂಝ ಪ್ಯಾಲೇಸಿನಲ್ಲಿ ನಡೆಯಿತು.
ಅಬೂ ಮಫಾಝ್ ಮದನಿ ಹಳೆಕೋಟೆ ಅಧ್ಯಕ್ಷತೆ ವಹಿಸಿದರು. ಅಬ್ಬಾಸ್ ಮದನಿ ಉಳ್ಳಾಲ ಮಜ್ಲಿಸಿಗೆ ನೇತ್ರತ್ವ ನೀಡಿ ದುಆಗೈದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಖಾಲಿದ್ ಸ್ವಾಗತಿಸಿದರು. ಆರ್ ಕೆ ಮದನಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು. ಬಳಿಕ ವರದಿ ಹಾಗು ಲೆಕ್ಕಪತ್ರ ಮಂಡಿಸಿ, ಸಭೆಯ ಅಂಗೀಕಾರ ಪಡೆಯಲಾಯಿತು. ಎರಡು ವರ್ಷಗಳ ಅವಧಿಯಲ್ಲಿ ಬ್ರಾಂಚ್ ಮಾಡಿದ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯ ಚಟುವಟಿಕೆಯ ಮಾಹಿತಿಯನ್ನು ಅಬೂ ಮಫಾಝ್ ಮದನಿ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಎಸ್ ವೈ ಎಸ್ ಸಂಘಟನೆಯ ಅನಿವಾರ್ಯತೆಯ ಕುರಿತು ಮಾತನಾಡಿದ ಬಳಿಕ ಹಾಲಿ ಸಮಿತಿಯನ್ನು ವಿಸರ್ಜಿಸಿ, ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.
ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಸಮಿತಿಯ ನೂತನಾಧ್ಯಕ್ಷರಾಗಿ ಅಬೂಬಕರ್ ಸಿದ್ದೀಕ್ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಉಳ್ಳಾಲ, ಕೋಶಾಧಿಕಾರಿಯಾಗಿ ಶಬೀರ್ ಹಳೆಕೋಟೆ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಮನ್ಸೂರ್ ಹಳೆಕೋಟೆ, ದಅವಾ ಕಾರ್ಯದರ್ಶಿಯಾಗಿ ಅಶ್ರಫ್ ಝುಹ್ರಿ, ಇಸಾಬಃ ಕಾರ್ಯದರ್ಶಿಯಾಗಿ ಖಾಲಿದ್ ಅಕ್ಕರೆಕೆರೆ, ಸಂಘಟನಾ ಕಾರ್ಯದರ್ಶಿಯಾಗಿ ಸತ್ತಾರ್ ಅಕ್ಕರೆಕೆರೆ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬೂಮಫಾಝ್ ಮದನಿ ಹಳೆಕೋಟೆ, ಹಸನ್ ಬಾವ ಹಾಜಿ ಅಕ್ಕರೆಕೆರೆ, ಹಂಝ ಹಳೆಕೋಟೆ, ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಅಬ್ದುಲ್ ಅಝೀಝ್ ಮುಸ್ಲಿಯಾರ್, ಇಕ್ಬಾಲ್ ಅಕ್ಕರೆಕೆರೆ, ಕುತ್ತಾರ್ ಮುಹಮ್ಮದ್ ಅಬೂಬಕರ್, ಯೂನುಸ್, ಫಾರೂಖ್ ಅಕ್ಕರೆಕೆರೆ, ಖಲೀಲ್ ಹಳೆಕೋಟೆ ಆಯ್ಕೆಯಾದರು.
ಸೆಂಟರ್ ಕೌನ್ಸಿಲರುಗಳಾಗಿ ಅಬೂಬಕರ್ ಸಿದ್ದೀಕ್ ಅಕ್ಕರೆಕೆರೆ, ನವಾಝ್ ಸಖಾಫಿ ಉಳ್ಳಾಲ, ಶಬೀರ್ ಹಳೆಕೋಟೆ, ಮನ್ಸೂರ್ ಹಳೆಕೋಟೆ, ಅಬೂಮಫಾಝ್ ಮದನಿ ಹಳೆಕೋಟೆ, ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಖಾಲಿದ್ ಅಕ್ಕರೆಕೆರೆ ಆಯ್ಕೆಯಾದರು.
ಬಳಿಕ ನೂತನಾಧ್ಯಕ್ಷರಾದ ಅಬೂಬಕರ್ ಸಿದ್ದೀಕ್ ಅಕ್ಕರೆಕೆರೆ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ಶುಭ ಹಾರೈಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಬ್ರಾಂಚಿನ ಸದಸ್ಯರುಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಧನ್ಯವಾದಗೈದರು.










Comments