ಮೂರನೇ ಹಂತದ ರೇಷನ್ ಕಿಟ್ಟುಗಳು ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ 35 ಅರ್ಹ ಬಡ ಕುಟುಂಬಗಳಿಗೆ ವಿತರಣೆ.
ಮೊದಲೆರಡು ಹಂತಗಳಲ್ಲಿ 150 ಕುಟುಂಬಗಳಿಗೆ ಕಿಟ್ಟುಗಳನ್ನು ವಿತರಿಸಲಾಗಿತ್ತು.
ಶೀಘ್ರದಲ್ಲಿ ಸಾದಾತುಗಳಿಗೆ SYS ಉಳ್ಳಾಲ ವತಿಯಿಂದ ರೇಷನ್ ಕಿಟ್ಟುಗಳ ವಿತರಣೆ
ಜಾಗತಿಕ ಮಹಾಮಾರಿ "ಕೋವಿಡ್ 19" ಪ್ರಯುಕ್ತ ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅದರಲ್ಲೂ ಬಡ ಜನರು ತೀವ್ರ ಸಂಕಷ್ಟಗೊಳಗಾಗಿದ್ದಾರೆ. ಇಂತಹ ಜನರಿಗೆ ಜಾತಿ, ಧರ್ಮ ವ್ಯತ್ಯಾಸವಿಲ್ಲದೆ ತುರ್ತು ಸಹಾಯ ಹಾಗು ಸಾಂತ್ವನ ಸೇವೆಗಳಲ್ಲಿ SYS ಉಳ್ಳಾಲ ಸೆಂಟರ್ ತೊಡಗಿಸಿಕೊಂಡಿದ್ದು, ಇದರ ಭಾಗವಾಗಿ ಉಳ್ಳಾಲದ ಅರ್ಹ 35 ಬಡ ಕುಟುಂಬಗಳಿಗೆ ತ್ರತೀಯ ಹಂತದ ರೇಷನ್ ಕಿಟ್ಟುಗಳನ್ನು ವಿತರಿಸಲಾಯಿತು. ಈ ಮೂಲಕ ಉಳ್ಳಾಲದ 13 ಬ್ರಾಂಚುಗಳ 185 ಕುಟುಂಬಗಳು ಇದರ ಪ್ರಯೋಜನವನ್ನು ಪಡೆದರು. ಮುಂದಿನ ಹಂತದಲ್ಲಿ ಸಾದಾತುಗಳ 35 ಕುಟುಂಬಗಳಿಗೆ ರೇಷನ್ ಕಿಟ್ಟುಗಳನ್ನು ವಿತರಿಸುವ ಯೋಜನೆ SYS ಉಳ್ಳಾಲ ಸೆಂಟರ್ ಹಮ್ಮಿಕೊಂಡಿದೆ.
ಎಸ್ ವೈ ಎಸ್ ರಾಜ್ಯ ಸದಸ್ಯರೂ, SYS ಉಳ್ಳಾಲ ಸೆಂಟರ್ ನಾಯಕರೂ ಆದ ಬಿಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ತ್ವಾಹಿರ್ ಹಾಜಿ ಹಾಜರಿದ್ದರು.
ಹಸಿದವನಿಗೆ ಆಹಾರ ಒದಗಿಸುವುದು ಅತ್ಯಂತ ದೊಡ್ಡ ಪುಣ್ಯದಾಯಕ ಕರ್ಮವಾಗಿದೆ. ಇಸ್ಲಾಮ್ ಅದಕ್ಕೆ ದೊಡ್ಡ ಪ್ರತಿಫಲ ನೀಡುವುದಾಗಿ ಘೋಷಿಸುತ್ತದೆ. ಹಸಿದವನ ಹಸಿವು ನೀಗಿಸುವ ಸೇವೆ ನಿಜಕ್ಕೂ ಶ್ಲಾಘನೀಯ. ಅಲ್ಲಾಹು ಸ್ವೀಕರಿಸಲಿ. ರೇಷನ್ ಕಿಟ್ಟುಗಳ ವಿತರಣೆಗೆ ತನು, ಮನ, ಧನಗಳಿಂದ ಸಹಕರಿಸಿದ ಸರ್ವರಿಗೂ ಅಲ್ಲಾಹನು ದ್ವಿಲೋಕದಲ್ಲೂ ಯಶಸ್ಸನ್ನು ನೀಡಲಿ. ಆಮೀನ್
✍ ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ


Comments