ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ 110 ಅರ್ಹ ಬಡ ಕುಟುಂಬಗಳಿಗೆ ದ್ವಿತೀಯ ಹಂತದ ರೇಷನ್ ಕಿಟ್ ವಿತರಣೆ
ಜಾಗತಿಕ ಮಹಾಮಾರಿ "ಕೋವಿಡ್ 19" ಪ್ರಯುಕ್ತ ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅದರಲ್ಲೂ ಬಡ ಜನರು ತೀವ್ರ ಸಂಕಷ್ಟಗೊಳಗಾಗಿದ್ದಾರೆ. ಇಂತಹ ಜನರಿಗೆ ಜಾತಿ, ಧರ್ಮ ವ್ಯತ್ಯಾಸವಿಲ್ಲದೆ ತುರ್ತು ಸಹಾಯ ಹಾಗು ಸಾಂತ್ವನ ಸೇವೆಗಳಲ್ಲಿ SYS ಉಳ್ಳಾಲ ಸೆಂಟರ್ ತೊಡಗಿಸಿಕೊಂಡಿದ್ದು, ಇದರ ಭಾಗವಾಗಿ ಉಳ್ಳಾಲದ ಅರ್ಹ 110 ಬಡ ಕುಟುಂಬಗಳಿಗೆ ದ್ವಿತೀಯ ಹಂತದ ರೇಷನ್ ಕಿಟ್ಟುಗಳನ್ನು ವಿತರಿಸಲಾಯಿತು. ಈ ಮೊದಲು ಮೊದಲ ಹಂತದಲ್ಲಿ 40 ಕುಟುಂಬಗಳಿಗೆ ಕಿಟ್ಟುಗಳನ್ನು ವಿತರಿಸಲಾಗಿತ್ತು. ಈ ಮೂಲಕ ಉಳ್ಳಾಲದ 13 ಬ್ರಾಂಚುಗಳ 150 ಕುಟುಂಬಗಳು ಇದರ ಪ್ರಯೋಜನವನ್ನು ಪಡೆದರು.
ಎಸ್ ವೈ ಎಸ್ ರಾಜ್ಯ ಸದಸ್ಯರೂ, SYS ಉಳ್ಳಾಲ ಸೆಂಟರ್ ನಾಯಕರೂ ಆದ ಬಿಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ನಾಯಕರಾದ ಸತ್ತಾರ್ ಮೇಲಂಗಡಿ, ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ನಾಯಕರಾದ ನವಾಝ್ ಮೇಲಂಗಡಿ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ತ್ವಾಹಿರ್ ಹಾಜಿ, ಮಾಸ್ತಿಕಟ್ಟೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಆರ್ ಆರ್ ರಫೀಕ್, ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ ಹಾಜರಿದ್ದರು.
ಹಸಿದವನಿಗೆ ಉಣ ಬಡಿಸುವುದು ಅತ್ಯಂತ ದೊಡ್ಡ ಪುಣ್ಯದಾಯಕ ಕರ್ಮವಾಗಿದೆ. ಇಸ್ಲಾಮ್ ಅದಕ್ಕೆ ದೊಡ್ಡ ಪ್ರತಿಫಲ ನೀಡುವುದಾಗಿ ಘೋಷಿಸುತ್ತದೆ. ಹಸಿದವನ ಹಸಿವು ನೀಗಿಸುವ ಸೇವೆ ನಿಜಕ್ಕೂ ಶ್ಲಾಘನೀಯ. ಅಲ್ಲಾಹು ಸ್ವೀಕರಿಸಲಿ. ರೇಷನ್ ಕಿಟ್ಟುಗಳ ವಿತರಣೆಗೆ ತನು, ಮನ, ಧನಗಳಿಂದ ಸಹಕರಿಸಿದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸದಸ್ಯರಿಗೂ, ಇತರರಿಗೂ ಅಲ್ಲಾಹನು ಇಹದಲ್ಲಿ ಐಶ್ವರ್ಯ, ಸಿರಿವಂತಿಕೆ ನೀಡಲಿ. ಪರದಲ್ಲಿ ಸ್ವರ್ಗವನ್ನು ನೀಡಲಿ. ಆಮೀನ್











Comments