KMJ, SYS ಅಕ್ಕರೆಕೆರೆ ಹಳೆಕೋಟೆ ಶಾಖೆ ಹಮ್ಮಿಕೊಂಡ ಸುನ್ನೀ ಆದರ್ಶ ಸಮ್ಮೇಳನ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಉಳ್ಳಾಲದ ಅಕ್ಕರೆಕೆರೆಯಲ್ಲಿ ಮೌಲವಿಗಳು ಸ್ಟೇಜ್ ಕಟ್ಟಿ ಬಿತ್ತರಿಸಿದ ವಂಚನೆಗಳನ್ನು ಒಂದೊಂದಾಗಿ ಬಯಲಿಗೆಳೆದು ಉಳ್ಳಾಲದ ನಾಗರಿಕರಿಗೆ ಸುನ್ನತ್ ಜಮಾಅತಿನ ನೈಜ ಆಶಯಾದರ್ಶಗಳನ್ನು ಸವಿಸ್ತಾರವಾಗಿ ತೋಕೆ ಉಸ್ತಾದ್ ವಿವರಿಸಿದ್ದಾರೆ.
ಉಳ್ಳಾಲದ ಅಲ್ಲಲ್ಲಿ ನೂತನವಾದಿಗಳು ಸ್ಟೇಜ್ ಕಟ್ಟಿ ತಮ್ಮ ವಿಚಿತ್ರ ನೀಚ ಆಶಯಗಳನ್ನು ಬಿತ್ತರಿಸುತ್ತಿದ್ದರು. ತಮಗೆ ಅರಿವಿಲ್ಲ ಎಂದು ಕೂಡಾ ಅರಿಯದ ಕೆಲವು ಮೌಲವಿಗಳು ಒಟ್ರಾಸಿ ಇಸ್ಲಾಮಿನ ಬಗ್ಗೆ ಮಾತನಾಡುತ್ತಿದ್ದರು. ರಮಳಾನಿಗೆ ಸ್ವಾಗತ ಎಂಬ ಹೆಸರಿಟ್ಟು ಮಾಡಿದ ಸಲಫಿಗಳ ಸಭೆಯಲ್ಲಿ ರಮಳಾನ್ ನಲ್ಲಿ ಮಾಡಬೇಕಾದ ಎಲ್ಲಾ ಒಳಿತುಗಳನ್ನು ಸ್ವಯಂ ರಿಮೂವ್ ಮಾಡಿ ಮಾತನಾಡುತ್ತಿದ್ದರು. ಇಸ್ಲಾಮಿನ ಬಾಲಪಾಠ ಕೂಡಾ ಅವರಿಗೆ ತಿಳಿದಿಲ್ಲ ಎಂದು ಅವರ ಮಾತಿನಿಂದಲೇ ತಿಳಿಯುತ್ತಿತ್ತು. ಸಲಫಿ ಮೌಲವಿಗಳು ಮುಗ್ಧ ಜನರನ್ನು ಹೇಗಾದರೂ ಮಾಡಿ ವಂಚಿಸಬಹುದು ಎಂದು ಅವರ ವಿವರಣೆಯಿಂದ ತಿಳಿಯುತ್ತದೆ. ಇಸ್ಲಾಮಿನ ಸುಂದರ ಆಶಯಾದರ್ಶಗಳಿಗೆ ಧಕ್ಕೆ ತರುವಂತಹ ಕುಪ್ರಯತ್ನಗಳು ಸಲಫಿ ಮೌಲವಿಗಳು ನಡೆಸಿದರಿಂದ ಇಸ್ಲಾಮಿನ ಎಳೆಯ ಬಾಲಕರ, ಯುವಕರ ಮನಸ್ಸಿನಲ್ಲಿ ಚಂಚಲತೆ ಉಂಟು ಮಾಡುವ ಪ್ರಯತ್ನ ಮಾಡಿದ ನಿಮಿತ್ತ ಇಸ್ಲಾಮಿನ ನೈಜ ಆಶಯಗಳನ್ನು ತಿಳಿಸುವ ಸಲುವಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು ಸುನ್ನೀ ಯುವಜನ ಸಂಘ ಅಕ್ಕರೆಕೆರೆ ಹಳೆಕೋಟೆ ಶಾಖೆಯ ವತಿಯಿಂದ ಉಳ್ಳಾಲದ ಹ್ರದಯ ಭಾಗವಾದ ಅಕ್ಕರೆಕೆರೆ ಜಂಕ್ಷನ್ ನಲ್ಲಿ ಸುನ್ನೀ ಆದರ್ಶ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು.
KMJ, SYS ಅಕ್ಕರೆಕೆರೆ ಹಳೆಕೋಟೆ ಶಾಖೆಯ ನಾಯಕರ ಕಾರ್ಯಕರ್ತರ ಕಠಿಣ ಪರಿಶ್ರಮ ಮತ್ತು ಉದಾರ ದಾನಿಗಳ ಸಹಕಾರ ಇದರ ಹಿಂದೆ ಇದೆ. ಕೇವಲ ಒಂದುವರೆ ದಿನದಲ್ಲಿ ಕಾರ್ಯಕ್ರಮದ ಎಲ್ಲಾ ಸೆಟಪ್ಪು ಮಾಡಲಾಗಿತ್ತು. ಸಂಶಯ ನಿವಾರಣೆಗೆ ಮುಕ್ತ ಅವಕಾಶ ಇದ್ದರೂ ಯಾವುದೇ ಸಂಶಯಗಳು ಉಳಿಯದ ರೀತಿಯಲ್ಲಿ ತೋಕೆ ಉಸ್ತಾದ್ ರವರ ಕ್ಲಿಪ್ಪಿಂಗ್ ಸಹಿತ ವಿವರಣೆ ಸುಂದರವಾಗಿತ್ತು.
ಉಳ್ಳಾಲ ಸುತ್ತಮುತ್ತಲಿಂದ ಜನ ಹರಿದು ಬಂದರು. ಒಂದೆರಡು ಸಲಫಿಗಳು ಸಭೆಯೆಡೆಯಲ್ಲಿದ್ದರು. ಗುಸುಗುಸು ಮಾತನಾಡುತ್ತಿದ್ದರು. ತೋಕೆ ಉಸ್ತಾದರ ಸರಿಯಾದ ವಿವರಣೆ ಅವರ ಮನಸ್ಸಿಗೆ ನಾಟಿತೋ ಏನೋ ಮತ್ತೆ ಅವರು ಸುಮ್ಮನಾಗಿದ್ದರು.
ಸಲಫಿಗಳೊಂದಿಗೆ ಹೇಳಲಿಕ್ಕಿರುವುದೇನೆಂದರೆ ಮೌಲವಿಗಳೆನಿಸಿಕೊಂಡವರು ನಿಮ್ಮನ್ನು ವಂಚಿಸುತ್ತಿದ್ದಾರೆ. ಕೆಳಗೆ ಸುನ್ನೀ ಆದರ್ಶ ಸಮ್ಮೇಳನದ ಲಿಂಕ್ ಹಾಕಿದ್ದೇನೆ. ಸಲಫಿ ಮೌಲವಿಗಳ ವಿಚಿತ್ರ ಪೊಳ್ಳುವಾದಗಳು ಮತ್ತು ಅದಕ್ಕೆ ತೋಕೆ ಉಸ್ತಾದರ ತಕ್ಕ ಪ್ರತ್ಯುತ್ತರ ಪ್ರಮಾಣಗಳ ಸಹಿತ ಆ ಲಿಂಕಿನಲ್ಲಿದೆ. ಸಮಯ ಸಿಕ್ಕಾಗ ಸಂಪೂರ್ಣವಾಗಿ ವೀಕ್ಷಿಸಿ.
✍️ ನವಾಝ್ ಸಖಾಫಿ ಉಳ್ಳಾಲ
ಪ್ರ ಕಾರ್ಯದರ್ಶಿ : ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಶಾಖೆ
Comments