ಎಸ್ ವೈ ಎಸ್ ಉಳ್ಳಾಲ ಸೆಂಟರ್ ಈ ಲಾಕ್ಡೌನ್ ಮತ್ತು ಪವಿತ್ರ ರಂಝಾನ್ ಸಂದರ್ಭ ಹಮ್ಮಿಕೊಂಡ ಸಾಂತ್ವನ ಚಟುವಟಿಕೆಗಳ ಕುರಿತು ಪುಟ್ಟ ಮಾಹಿತಿ.
ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಈ ಲಾಕ್ಡೌನ್ ಮತ್ತು ಪವಿತ್ರ ರಂಝಾನ್ ಸಂದರ್ಭ ಹಮ್ಮಿಕೊಂಡ ಸಾಂತ್ವನ ಚಟುವಟಿಕೆಗಳ ಕುರಿತು ಪುಟ್ಟ ಮಾಹಿತಿ.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದಲ್ಲಿ 13 ಬ್ರಾಂಚುಗಳು ಒಳಗೊಂಡಿದ್ದು, ಪ್ರತಿಯೊಂದು ಬ್ರಾಂಚುಗಳು ಕೂಡಾ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ.
ಜಗತ್ತಿಗೆ ಮಾರಕವಾಗಿ ಬಾಧಿಸಿದ ಕೋರೋಣ ವೈರಸ್ ಭಾರತಕ್ಕೆ ಅಬ್ಬರಿಸಿದ ಪರಿಣಾಮ ಕೇಂದ್ರ ಹಾಗು ರಾಜ್ಯ ಸರ್ಕಾರ ಲಾಕ್ ಡೌನ್ ನಿಯಮ ಜಾರಿಗೆ ತಂದಿತು. ಈ ಮೂಲಕ ಜನರು ಸಂಕಷ್ಟಕ್ಕೆ ಒಳಗಾದರು. ಅದರಲ್ಲೂ ಬಡ ಹಾಗು ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟವನ್ನು ಅನುಭವಿಸುವಂತಾಯಿತು. ಇದನ್ನರಿತ ರಾಜ್ಯ ಎಸ್ ವೈ ಎಸ್ ಜನರ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವ್ರತ್ತರಾದರು. ಇದರ ಅಧೀನದಲ್ಲಿ ಕಾರ್ಯಾಚರಿಸುವ ರಾಜ್ಯದ ಎಲ್ಲಾ ಜಿಲ್ಲೆ, ಸೆಂಟರ್ ಹಾಗು ಬ್ರಾಂಚಿಗಳಿಗೆ ಆದೇಶವನ್ನು ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕರೆ ನೀಡಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಸುನ್ನೀ ಸಂಘಟನೆಗಳು ಕಾರ್ಯಾಚರಣೆಗೆ ಇಳಿದವು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡ ತಂಡ ಜನರ ಸಮಸ್ಯೆಗಳಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ತುರ್ತು ಆನ್ಲೈನ್ ಸಭೆ ನಡೆಸಿ ಲಾಕ್ ಡೌನ್ ಹಾಗು ರಂಝಾನ್ ಸಂದರ್ಭದಲ್ಲಿ ಜಾತಿ ಮತ ಭೇದ ಮರೆತು ಅರ್ಹ ಕುಟುಂಬಗಳಿಗೆ ರೇಷನ್ ಕಿಟ್ಟುಗಳ ವಿತರಣೆ, ಅರ್ಹ ಕುಟುಂಬ ಸದಸ್ಯರಿಗೆ ನಗದು ಸಹಾಯ ಹಸ್ತಾಂತರ, ಚಿಕಿತ್ಸಾ ನೆರವು ಇನ್ನಿತರ ಹಲವು ಪ್ರಶಂಸನೀಯವಾದ ಸಾಂತ್ವನ ಚಟುವಟಿಕೆಗಳನ್ನು ನಡೆಸಿತು. ಲಾಕ್ ಡೌನ್ ಘೋಷಣೆಯಾದ ವಾರದೊಳಗೆ 40 ಕುಟುಂಬಗಳಿಗೆ ರೇಷನ್ ವಿತರಿಸಿತು.
ಎರಡನೇ ಹಂತದಲ್ಲಿ 142 ಕುಟುಂಬಗಳಿಗೆ ರೇಷನ್ ಕಿಟ್ಟುಗಳನ್ನು ತಲುಪಿಸಲಾಯಿತು. ಮೂರನೇ ಹಂತದಲ್ಲಿ ಉಳ್ಳಾಲ ಸುತ್ತಮುತ್ತ ಪರಿಸರದ 35 ಸಾದಾತ್ ಕುಟುಂಬಗಳ ಸಹಿತ 70 ಕುಟುಂಬಗಳಿಗೆ ರೇಷನ್ ವಿತರಿಸಲಾಯಿತು.
ಮುಕ್ಕಚ್ಚೇರಿ ಸುಭಾಷ್ ನಗರದ ದಿನೇಶ್,ಆಝಾದ್ ನಗರ ನಿವಾಸಿ ತಮಿಳು ನಾಡು ಮೂಲದ ಸತೀಶ್ ರಾಮಚಂದ್ರನ್ ಹಾಗು ಸೆಲ್ವೀ ಎಂಬ ಮಹಿಳೆ ಸಹಿತ ಉಳ್ಳಾಲ ಆಸುಪಾಸಿನ 250 ಕ್ಕೂ ಮಿಕ್ಕ ಕುಟುಂಬಗಳು ಜಾತಿ ಧರ್ಮಗಳ ಅಂತರವಿಲ್ಲದೆ ಇದರ ಪ್ರಯೋಜನವನ್ನು ಪಡೆದರು.
ಜಾತಿ, ಧರ್ಮ ವ್ಯತ್ಯಾಸವಿಲ್ಲದೆ 250 ಕ್ಕೂ ಮಿಕ್ಕ ಕುಟುಂಬಗಳಿಗೆ ರೇಷನ್ ಕಿಟ್ ತಲುಪಿಸುವ ಮೂಲಕ ಮಾದರೀ ಸೇವೆ ನೀಡಿದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಳ್ಳಾಲ ವ್ಯಾಪ್ತಿಯ 83 ಅರ್ಹ ಕುಟುಂಬಗಳಿಗೆ ಎರಡು ಹಂತಗಳಲ್ಲಿ ನಗದು ಹಸ್ತಾಂತರ ಮತ್ತು ಕಿಡ್ನಿ ಹಾಗು ಬ್ರೈನ್ ಟ್ಯೂಮರ್ ರೋಗದಿಂದ ಬಳಲುತ್ತಿದ್ದ ಎರಡು ರೋಗಿಗಳ ಚಿಕಿತ್ಸೆಗೆ ಧನ ಸಹಾಯ ವಿತರಿಸಿ ಶ್ಲಾಘನೀಯ ಸಾಂತ್ವನ ಚಟುವಟಿಕೆ ನಡೆಸಿ ಎಲ್ಲರಿಗೂ ಮಾದರಿಯಾದರು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಲಾಕ್ ಡೌನ್ ಹಾಗು ರಂಝಾನ್ ಸಮಯದಲ್ಲಿ ಎರಡು ಲಕ್ಷದ ಒಂಭತ್ತು ಸಾವಿರದ ಐನೂರು ರೂಪಾಯಿಗಳು ಮೌಲ್ಯದ ರೇಷನ್ ಕಿಟ್ಟುಗಳು, ತೊಂಭತ್ತಾರು ಸಾವಿರ ರೂಪಾಯಿಗಳ ನಗದು ಧನ ಸಹಾಯ ಮತ್ತು ಇಪ್ಪತ್ತಮೂರು ಸಾವಿರ ರೂಪಾಯಿಗಳ ಚಿಕಿತ್ಸಾ ನೆರವು ಅರ್ಹರಿಗೆ ವಿತರಿಸಿತು. ಒಟ್ಟು ಮೂರು ಲಕ್ಷದ ಇಪ್ಪತ್ತೆಂಟು ಸಾವಿರದ ಐನೂರು ರೂಪಾಯಿಗಳ ಸಾಂತ್ವನ ಚಟುವಟಿಕೆಗಳು ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ನಡೆಸಲಾಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ಸಾಂತ್ವನ ಚಟುವಟಿಕೆಗಳಿಗೆ ತನು, ಮನ, ಧನಗಳಿಂದ ಸಹಕರಿಸಿದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಾಗು ಅಧೀನ ಬ್ರಾಂಚುಗಳ ನಾಯಕರು, ಸದಸ್ಯರು, ಹಿತೈಷಿಗಳು, ದಾನಿಗಳು, ಸರ್ವರಿಗೂ ಅಲ್ಲಾಹನು ದ್ವಿಲೋಕದಲ್ಲಿ ಅಭಿವ್ರದ್ಧಿ ಯಶಸ್ಸನ್ನು ನೀಡಲಿ. ಆಮೀನ್
ಮುಂದೆಯೂ ತಮ್ಮೆಲ್ಲರ ಸಹಾಯ ಸಹಕಾರ ನಿರೀಕ್ಷೆಯೊಂದಿಗೆ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು.
ಎಸ್ ವೈ ಎಸ್ ಉಳ್ಳಾಲ ಸೆಂಟರ್

Comments