Skip to main content

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ವತಿಯಿಂದ ಬಡ ಕುಟುಂಬಕ್ಕೆ ಸಾಂತ್ವನ ಮತ್ತು ಸಹಾಯ

ವಿಟ್ಲದಲ್ಲಿರುವ ಕುಟುಂಬವೊಂದರ ಏಕೈಕ ಆಧಾರ ಸ್ತಂಭವಾಗಿದ್ದ ಮನೆಯ ಯಜಮಾನ ಮರಣ ಹೊಂದಿದಾಗ ಕುಟುಂಬದ ಮುಂದಿನ ಜೀವನಾಧಾರಕ್ಕೆ ದಿಕ್ಕು ತೋಚದಿದ್ದಾಗ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ಸಮಿತಿಯು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿತು.
ಅಗಲಿದ ವ್ಯಕ್ತಿಗೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ರವರ ನೇತ್ರತ್ವದಲ್ಲಿ ತಹ್ಲೀಲ್ ಸಮರ್ಪಿಸಿ ದುಆ ನಡೆಸಲಾಯಿತು.
ತಾಯಿ ಮತ್ತು ಮೂರು ಹೆಣ್ಣು ಮಕ್ಕಳ ಹೊಣೆಯು ಉಳ್ಳಾಲ ದಅವಾ ಕಾಲೇಜ್ ನಲ್ಲಿ ಅಂತಿಮ ಪದವಿ ಕಲಿಯುತ್ತಿರುವ ಏಕೈಕ ಪುತ್ರ ನ ಮೇಲಿದ್ದು ಶಿಕ್ಷಣ ಮುಂದುವರಿಕೆ ಕುರಿತು ಚಿಂತಾಮಗ್ನರಾಗಿದ್ದ ಸಂದರ್ಭ  ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗ ಮಗನ ಶಿಕ್ಷಣ ಪೂರ್ತೀಕರಿಸುವಂತೆಯೂ ಆ ತನಕ ಮನೆಗೆ ಅಗತ್ಯ ರೇಷನ್ ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಮಾಸಂಪ್ರತಿ ನೀಡುವುದಾಗಿ ತಿಳಿಸಲಾಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗ ಚೇರಮಾನ್ ಅಲ್ತಾಫ್ ಕುಂಪಲರವರ ನೇತ್ರತ್ವದಲ್ಲಿ ಪ್ರಥಮ ತಿಂಗಳ ರೇಷನ್ ವಿತರಿಸಲಾಯಿತು.
ಈ ಸಂದರ್ಭ ಎಸ್ ವೈ ಎಸ್   ಜಿಲ್ಲಾ ಕೋಶಾಧಿಕಾರಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಸಂಚಾಲಕ ಮುಹಮ್ಮದ್ ಅಶ್ರಫ್ ಹಾಜಿ, ಸೆಂಟರ್ ಕೋಶಾಧಿಕಾರಿ ಇಸ್ಹಾಕ್ ಬಸ್ತಿಪಡ್ಪು, ಉಮರ್ ಫಾರೂಕ್ ಬೊಟ್ಟು, ಮುಸ್ತಪ ಮಾಸ್ಟರ್ ಮುಕಚ್ಚೇರಿ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಮುಸ್ತಪ ವಿಟ್ಲ  ಮುಂತಾದವರು ಉಪಸ್ಥಿತರಿದ್ದರು.

Comments