ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಸುಲ್ತಾನುಲ್ ಹಿಂದ್ ಖ್ವಾಜಾ ಮುಈನುದ್ದೀನ್ ಚಿಸ್ತಿ ಅವರ ಉರೂಸ್ ಪ್ರಯುಕ್ತ ಖ್ವಾಜಾ ಗರೀಬ್ ನವಾಝ್ ಡೇ ಅಂಗವಾಗಿ ಬಡ ಬಗ್ಗರಿಗೆ ಆಹಾರ ವಿತರಣಾ ಕಾರ್ಯಕ್ರಮದ ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮ
ಸುಲ್ತಾನುಲ್ ಹಿಂದ್ ಖ್ವಾಜಾ ಮುಈನುದ್ದೀನ್ ಚಿಸ್ತಿ ಅವರ ಉರೂಸ್ ಪ್ರಯುಕ್ತ ಖ್ವಾಜಾ ಗರೀಬ್ ನವಾಝ್ ಡೇ ಅಂಗವಾಗಿ ಬಡ ಬಗ್ಗರಿಗೆ ಆಹಾರ ವಿತರಣಾ ಕಾರ್ಯಕ್ರಮದ ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮವು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ವಠಾರದಲ್ಲಿ ನಡೆಯಿತು.
ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ ಫೆಬ್ರವರಿ 08 ರಂದು ಸುಲ್ತಾನುಲ್ ಹಿಂದ್ ಖ್ವಾಜಾ ಗರೀಬ್ ನವಾಝ್ ರವರ ಉರೂಸ್ ಪ್ರಯುಕ್ತ ಅವರ ಸಂಸ್ಮರಣಾರ್ಥ ರಾಜ್ಯದಾದ್ಯಂತ ಬಡ ಬಗ್ಗರು, ರೋಗಿಗಳು, ಯಾತ್ರಾರ್ಥಿಗಳು, ಅನಾಥಾಶ್ರಮ, ವ್ರದ್ಧಾಶ್ರಮಗಳಿಗೆ ಆಹಾರ ವಿತರಣೆಯು ಎಸ್ ವೈ ಎಸ್ ನಡೆಸುತ್ತಿದೆ ಎಂದು ತಿಳಿಸಿ ರಾಜ್ಯ ಮಟ್ಟದ ಆಹಾರ ವಿತರಣೆಯ ಉದ್ಘಾಟನೆ ನೆರವೇರಿಸಿದರು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಪಿ.ಎಸ್.ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಸ್ವಾಗತಿಸಿದರು.
ಬಳಿಕ ಉಳ್ಳಾಲ ದರ್ಗಾದ ಯಾತ್ರಾರ್ಥಿಗಳು, ಭಕ್ತಾದಿಗಳು, ಭಿಕ್ಷುಕರು ಹಾಗು ಬಿಜೈ ಕಾಪಿಕಾಡಿನ ಮತ್ತು ಪಂಪ್ವೆಲ್ ಸಮೀಪದ ಎರಡು ಏಡ್ಸ್ ಪೀಡಿತ ಮಕ್ಕಳ ಆರೈಕೆ ಆಶ್ರಮಗಳಿಗೆ ಆಹಾರ ವಿತರಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹಂಝ ಮದನಿ ಮಿತ್ತೂರು, ರಾಜ್ಯ ಎಸ್ ವೈ ಎಸ್ ಪಬ್ಲಿಕ್ ರಿಲೇಶನ್ಸ್ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್, ದ.ಕ ಜಿಲ್ಲಾ ವೆಸ್ಟ್ ಸಾಂತ್ವನ ಕಾರ್ಯದರ್ಶಿ ಇಸ್ಹಾಖ್ ಝುಹ್ರಿ, ಉಳ್ಳಾಲ ಸೆಂಟರ್ ಗೌರವಾಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಲ್, ಸೆಂಟರ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ, ಸಂಘಟನಾ ಕಾರ್ಯದರ್ಶಿ ಫಾರೂಖ್ ಅಬ್ಬಾಸ್ ಹಾಜಿ ಉಳ್ಳಾಲ, ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸಾಂತ್ವನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ದಅವಾ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ, ಇಸಾಬಃ ಅಮೀರ್ ಶರೀಫ್ ಮಂಚಿಲ, ಸೋಶಿಯಲ್ ಕಾರ್ಯದರ್ಶಿ ಇಲ್ಯಾಸ್ ಕೈಕೋ ಹಾಗು ಸೆಂಟರ್ ಅಧೀನದ ಬ್ರಾಂಚುಗಳ ನಾಯಕರು, ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು.
ಎಸ್ ವೈ ಎಸ್ ದ.ಕ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಖಲೀಲ್ ಉಸ್ತಾದ್ ಕಾವೂರು ಧನ್ಯವಾದ ಮಾಡಿದರು.
Comments