ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಅಲ್ ಉಸ್ರತುತ್ವಯ್ಯಿಬಃ (ಸಂತುಷ್ಟ ಕುಟುಂಬ) ಮಾಹಿತಿ ಕಾರ್ಯಾಗಾರ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಉಳ್ಳಾಲ ಮೇಲಂಗಡಿಯ ತಾಜುಲ್ ಉಲಮಾ ಸುನ್ನೀ ಸೆಂಟರಿನಲ್ಲಿ ನಡೆಯಿತು.
ಎಸ್ ವೈ ಎಸ್ ರಾಜ್ಯ ನಾಯಕ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೆಂಟರ್ ದಅವಾ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಅಲ್ ಉಸ್ರತುತ್ವಯ್ಯಿಬಃ ಪ್ರತೀ ಮನೆಯಲ್ಲಿ ನಡೆಸುವುದರ ಕುರಿತು ಮಾಹಿತಿ ನೀಡಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ಸ್ವಾಗತಿಸಿದರು.
ಪ್ರಸ್ತುತ ಸಭೆಯಲ್ಲಿ ಸೆಂಟರ್ ಪದಾಧಿಕಾರಿಗಳು, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರು, ಸೆಂಟರ್ ಅಧೀನದ ಪ್ರತೀ ಬ್ರಾಂಚಿನ ಪಿ,ಎಸ್,ಟಿ ಉಪಸ್ಥಿತರಿದ್ದರು.















Comments